ವಿಂಗ್ ಕಮಾಂಡರ್ ಡ್ಯಾರಿಲ್ ಕ್ಯಾಸ್ಟೆಲಿನೊ ( ) (02 ನವೆಂಬರ್ 1975 - 25 ಜೂನ್ 2013) — ಭಾರತೀಯ ವಾಯುಪಡೆಯ ಅಧಿಕಾರಿ. ಉತ್ತರಾಖಂಡದಲ್ಲಿ ಭಾರತೀಯ ವಾಯುಪಡೆಯು ಕೈಗೊಳ್ಳುತ್ತಿರುವ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ -17 V5 ಹೆಲಿಕಾಪ್ಟರ್‌ನ ಕ್ಯಾಪ್ಟನ್ ಆಗಿದ್ದರು. ಕ್ಯಾಸ್ಟೆಲಿನೊ ಅವರು ಇದು ಭಾರತದ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ "ಕೀರ್ತಿ ಚಕ್ರ"ದ ಪುರಸ್ಕೃತರಾಗಿದ್ದರು. ಪ್ರಶಸ್ತಿ ಪತ್ರದಲ್ಲಿ ನಮೂದಿಸಿರುವಂತೆ, ಕ್ಯಾಸ್ಟೆಲಿನೊ ಅವರು "ಅಮೂಲ್ಯ ಜೀವಗಳನ್ನು ಉಳಿಸುವುದಕ್ಕಾಗಿ ಏಕ-ಮನಸ್ಸಿನಲ್ಲಿ ಗಮನ ನೀಡುವ ದೃಢವಿಶ್ವಾಸದ ಅಧಿಕಾರಿ" ಮತ್ತು "ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಅಮೂಲ್ಯ ಜೀವಗಳನ್ನು ಉಳಿಸುವ ಕಾರ್ಯಾಚರಣೆಯಲ್ಲಿ ಪ್ರಮುಖ ಧೈರ್ಯ, ವೃತ್ತಿಪರ ಸಾಮರ್ಥ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದವರು" ಎಂದು ಹೇಳಲಾಗಿದೆ. == ಜನನ ಮತ್ತು ಶಿಕ್ಷಣ == ಡೆರಿಲ್ ಮೂಲತಃ ಮಂಗಳೂರಿನವರು. ಅವರ ತಂದೆ ಕ್ಯಾಸ್ಟಲಿನೋ ಮಂಗಳೂರಿನ ಕದ್ರಿಯವರು ಮತ್ತು ತಾಯಿ ಲೀನಾ ಬಜ್ಪೆ ಕಿನ್ನಿಗೋಳಿಯವರು. ಪೋಷಕರು ಮುಂಬಯಿಯ ವಕೋಲದಲ್ಲಿ ವಾಸಿಸುತ್ತಿದ್ದರಿಂದ ಡೆರಿಲ್ ಅಲ್ಲಿಯೇ ಬೆಳೆದರು. ಅವರು ಮುಂಬಯಿಯ ಸಾಂತಾಕ್ರೂಝ್‌ನ ಹೋಲಿಕ್ರಾಸ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿದರು. ನಂತರ ಅವರು ತಮ್ಮ ವೃತ್ತಿಜೀವನವನ್ನು ಐ.ಎ.ಎಫ್ ನಲ್ಲಿ ಪ್ರಾರಂಭಿಸಿದರು. ಅವರ ಬಹಳ ಹೃದಯವಂತರಾಗಿದ್ದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. == ಕುಟುಂಬ == ಡೆರಿಲ್ ರಿಗೆ ಶೆರಿಲ್ ಮತ್ತು ಮೆರಿಲ್ ಎಂಬ ಸಹೋದರಿಯರಿದ್ದರು. ಅವರ ಪತ್ನಿಯ ಹೆಸರು ಜ್ಯೋತಿ. ಮಕ್ಕಳು ಈಥಾನ್ ಮತ್ತು ಆಂಜೆಲಿನಾ. == ದುರಂತ == ಉತ್ತರಪ್ರದೇಶದ ಸಮೀಪದ ಉತ್ತರಾಂಚಲ್ ರಾಜ್ಯದಲ್ಲಿ ಕ್ರಿ.ಶ. ೨೦೧೩, ಜೂನ್, ೨೪ ರಂದು ವಿಪರೀತ ಮಳೆ ಬಿದ್ದ ಪರಿಣಾಮವಾಗಿ ಅಪಾರ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟವಾಯಿತು. ನದಿಯ ಪ್ರಕೋಪಕ್ಕೆ ಬಲಿಯಾಗಿ ಮಾರ್ಗವನ್ನು ಕಾಣದೆ ಜನರು ಪರಿತಪಿಸುತ್ತಿದ್ದಾಗ ಭಾರತ ಸರಕಾರದ ವಾಯಿಪಡೆಯ ಯೋಧರು ಮತ್ತು ಬಾರ್ಡರ್ ಸೆಕ್ಯೂರಿಟಿ ಯೋಧರು ತಮ್ಮ ಅಮೂಲ್ಯ ಜೀವವನ್ನು ಪಣಕ್ಕಿಟ್ಟು ಸಾವಿರಾರು ಮಂದಿಯ ಜೀವವನ್ನು ಉಳಿಸಿದರು. ಆ ಸಮಯದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ವಾಯುಪಡೆಯ -17 V5 ಚಾಪರ್ ಹೆಲಿಕಾಪ್ಟರ್, ನಿರಾಶ್ರಿತರನ್ನು ಹೊತ್ತು ಕೇದಾರ್ ನಾಥದ 'ಗೌರಿ ಕುಂಡ್' ನಿಂದ ಸುರಕ್ಷಿತ ಜಾಗಕ್ಕೆ ಬರುತ್ತಿದ್ದಾಗ, ೩೮ ವರ್ಷ ಪ್ರಾಯದ ಡೆರಿಲ್ ಕ್ಯಾಸ್ಟಲಿನೋ ಹಾಗೂ ಭದ್ರತಾ ಪಡೆಯ ಯೋಧ ಬಸವರಾಜ್, ತಮ್ಮ ಹೆಲಿಕಾಪ್ಟರ್‌ನಲ್ಲಿ ಉತ್ತರಾ ಖಂಡದ ಪ್ರವಾಹ ಸಂತ್ರಸ್ತ ರನ್ನು ರಕ್ಷಿಸಲು ತೆರಳಿದ್ದಾಗ, ಅವರ ಹೆಲಿಕಾಪ್ಟರ್ಪ ತನಗೊಂಡು ಎಲ್ಲರೂ ವಿಧಿವಶರಾದರು. ಒಟ್ಟಾರೆ ಚಾಪರ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ೨೦ ಜನರಲ್ಲಿ, 'ಇಂಡೋ ಟಿಬೆಟಿಯನ್ ಬಾರ್ಡರ್ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್' ನ ಯೋಧರು ಹೆಚ್ಚಾಗಿದ್ದರು. ಇದು ನಡೆದದ್ದು ಕ್ರಿ.ಶ. ೨೦೧೩, ಜೂನ್ ೨೫, ಮಂಗಳವಾರ. == ಅಂತ್ಯ ಕ್ರಿಯೆ == ಕ್ರಿ.ಶ. ೨೦೧೩, ಜೂನ್, ೨೯, ಶನಿವಾರ ಕ್ಯಾಸ್ಟಲಿನೊರವರ ಪಾರ್ಥಿವ ಶರೀರವನ್ನು ಮುಂಬಯಿಯ ಸಾಂತಾಕ್ರೂಜ್‌ಗೆ ತರಲಾಯಿತು. ಅಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ನಂತರ ಸಾಂತಾಕ್ರೂಜದ ಸೇಂಟ್ ಆಂಥೋನಿ ಚರ್ಚ್‌ನಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಿ, ಕಲೀನಾದ 'ಅವರ್ ಲೇಡಿ ಆಫ್ ಇಜಿಪ್ಟ್ ' ಸಮಾಧಿ ಭೂಮಿಯಲ್ಲಿ ದಫನ ಕ್ರಿಯೆ ನೆರೆವೇರಿಸಲಾಯಿತು. == ಉಲ್ಲೇಖಗಳು ==